Wednesday, January 28, 2026
Press Note : ಹೊಸಬೆಳಕು ಟ್ರಸ್ಟ್(ರಿ) 20ನೇ ವಾರ್ಷಿಕೋತ್ಸವ ಆಚರಣೆ, ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ, ನೇತ್ರ-ಅಂಗಾಂಗ -ದೇಹದಾನಿಗಳಿಗೆ ನಮನ ಮತ್ತು ಸಾಧಕರಿಗೆ ಸನ್ಮಾನ 25.1.2026
ಹೊಸಬೆಳಕು ಟ್ರಸ್ಟ್(ರಿ) 20ನೇ ವಾರ್ಷಿಕೋತ್ಸವ ಆಚರಣೆ, ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ, ನೇತ್ರ-ಅಂಗಾಂಗ -ದೇಹದಾನಿಗಳಿಗೆ ನಮನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜಿಗಣಿಯ ಸೆಂಟ್ಜೋಸೆಫ್ ಹೈಸ್ಕೂಲಿನಲ್ಲಿ ನಡೆಯಿತು.
ಹೊಸಬೆಳಕು ಟ್ರಸ್ಟಿನ ಸಂಸ್ಥಾಪಕರಾದ ಜಿಗಣಿರಾಮಕೃಷ್ಣ ಅವರ ತಂದೆ ಶ್ರೀ ಡ್ರೈ ವರ್ ಮುನಿಶಾಮಯ್ಯ ಅಮ್ಮ ನೇತ್ರದಾನಿ ಶ್ರೀಮತಿ ಸೊಣ್ಣಮ್ಮನವರ ಜ್ನಾಪಕಾರ್ಥ ಕಾರ್ಯಕರಮ ಹಮ್ಮಿಕೊಳ್ಳಲಾಗಿತ್ತು.
63ಕ್ಕೂ ಹೆಚ್ಚು ಜನ ಅಂಗಾAಗದಾನಿ(ಕಣ್ಣು) ಕುಟುಂಬಗಳಿಗೆ, ಕಣ್ಣು ಹಾಕಿಸಿಕೊಂಡ ೪ಜನರಿಗೆ, 3ಜನ ದೇಹದಾನಿ ಕುಟುಂಬಗಳಿಗೆ, ಕಿಡ್ನಿ, ಲಿವರ್ ದಾನ ಮಾಡಿದ ಎರಡು ಕುಟುಂಬಗಳನ್ನು ಸನ್ಮಾನಿಸಲಾಯಿತು, ಜೊತೆಯಲ್ಲಿ ಅಂತರಾಷ್ಟಿಯ ಪ್ಯಾರಾ ತ್ರೋಬಾಲ್ ತಂಡದ ನಾಯಕಿ ಶ್ರೀಮತಿ ರೇಣುಕಾ ಮತ್ತು ತಂಡವನ್ನು, ಸರ್ಕಾರಿ ಶಾಲೆಯ 10ನೇ ತರಗತಿಯಲ್ಲಿ ಹೆಚ್ಚಿನ ಅಂಕಪಡೆದ, ಆನೇಕಲ್ ತಾಲ್ಲೂಕಿನ ಕಬ್ಬಡ್ಡಿಯಲ್ಲಿ ಜಿಲ್ಲ್ಲಾ ಮಟ್ಟಕ್ಕೆ ಆಯ್ಕೆಯಾದ ಯುವತಿ ಮತ್ತು ಯುವಕರನ್ನು, 100ಕ್ಕೂ ಹೆಚ್ಚು ಭಾರಿ ರಕ್ತದಾನ ಮಾಡಿದವರನ್ನು, ವಿಶೇಷ ಸಾಧಕರನ್ನು, ವೈಧ್ಯರು, ಜೀವಗಳ ಉಳಿಸಲು ಸಹಕರಿಸಿದ ವೈಧ್ಯರುಗಳು,ಆಸ್ಪತ್ರೆಗಳು,ರಕ್ತ ನಿದಿಗಳು,ನೇತ್ರ ನಿದಿಗಳು,ನರ್ಸ್ಗಳು,ಆಂಬುಲೆನ್ಸ್ ಡ್ರೈ ವರ್ಗಳು, ಸೂಲಗಿತ್ತಿ, ಕರೋನಾ ವಾರಿಯರ್ಸ್ಗಳನ್ನು ಗೌರವಿಸಲಾಯಿತು.
ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ
ನಾರಾಯಣ ನೇತ್ರಾಲಯದಿಂದ ಕಣ್ಣಿನ ಎಲ್ಲಾ ಕಾಯಿಲೆಗಳ ಪರೀಕ್ಷೆ, ಪೊರೆ ಶಸ್ತ್ರ ಚಿಕಿತ್ಸೆ, ಉಚಿತ ಕನ್ನಡಕ ಆಯೋಜಕರಿಂದ.ನಾರಾಯಣ ಹೃದಯಾಲಯದಿಂದ ಹೃದಯರೋಗಗಳ ತಪಾಸಣೆ,ಈಸಿಜಿ, ದಿ ಆಕ್ಸಪರ್ಡ್ ಆಸ್ಪತ್ರೆಯಿಂದ ಸಾಮಾನ್ಯ ಖಾಯಿಲೆಗಳ,ಮಕ್ಕಳ, ಇಎನ್ಟಿ,ಮೂಳೆ,ಚರ್ಮ ಇತರೆ ರೋಗಗಳ ಪರೀಕ್ಷೆ ಮತ್ತು ಉಚಿತ ಔಷದಿ,
ಡಾ.ಲಾವಣ್ಯಕಿರಣ್ ಲಕ್ಷ್ಯ ವುಮನ್ ಮತ್ತು ಫರ್ಟಿಲಿಟಿ ಕ್ಲಿನಿಕ್ವತಿಯಿಂದ ಬಂಜೆತನ ಪರೀಕ್ಷೆ ಮತ್ತು ಸಲಹೆ, ಮುಟ್ಟು, ಹೆರಿಗೆ, ಗರ್ಭಕೋಷ, ಇತರೆ ಸ್ತ್ರೀರೋಗಳ ಪರೀಕ್ಷೆ.
150ಕ್ಕೂ ಹೆಚ್ಚು ಜನ ಶಾಲಾ ಪ್ರೌಡ ಹೆಣ್ಣುಮಕ್ಕಳಿಗೆ ಮುಟ್ಟಿನ ದಿನಗಳ ಶುಚಿತ್ವ, ಸಮಸ್ಯೆಗಳು,ಮರುಬಳಕೆ ಬಟ್ಟೆ ಪ್ಯಾಡ್ಗಳು,ಮೆನ್ಸೆಸ್ಟೆçಯಲ್ ಕಪ್ಸ್ ಬಳಕೆ ಬಗ್ಗೆ ತಿಳುವಳಿಕೆ ಮತ್ತು ವಿತರಣೆ.
ಬಯೋಕಾನ್ ಫೌಂಡೇಷನ್ವತಿಯಿಂದ ಕ್ಯಾನ್ಸರ್ ತಪಾಸಣೆ – Breast Cancer Thermal Screening, ಶ್ರೀ ವೆಂಕಟೇಶ್ವರ ಡೆಂಟಲ್ ಕಾಲೇಜು ಆಸ್ಪತ್ರೆಯಿಂದ ದಂತ ಪರೀಕ್ಷೆ , ಏಕನಾ ಆಸ್ಪತ್ರೆಯಿಂದ ರಕ್ತ ಪರೀಕ್ಷೆ ,ವೈಧ್ಯರ ಬೇಟಿ,
ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್, ನಾರಾಯಣ ನೇತ್ರಾಲಯ,ಜೀವ ಸಾರ್ಥಕತೆ ವತಿಯಿಂದ ನೇತ್ರದಾನ,ಅಂಗಾಂಗ ,ದೇಹ ದಾನ ನೊಂದಣೆ ಮತ್ತು ಅರಿವು ಕಾರ್ಯಕ್ರಮ ನಡೆಯಿತು. ಆರೊಗ್ಯ ಶಿಬಿರದಲ್ಲಿ 532 ಕ್ಕೂ ಹೆಚ್ಚುಜನ ಪಾಲ್ಗೊಂಡು ಶಿಬಿರದ ನಾನಾ ಪ್ರಯೋಜನ ಪಡೆದರು, 123 ಜನರಿಗೆ ಈಸಿಜಿ, 104 ಉಚಿತ ಕನ್ನಡಕ, 38 ಜನರಿಗೆ ಉಚಿತ ಪೊರೆ ಶಸ್ತ ಚಿಕಿತ್ಸೆ, ಇತರೆ ಎಲ್ಲಾ ಸೌಲಭ್ಯಗಳನ್ನು ಪಡೆದರು.
ಹೊಸಬೆಳಕು ಟ್ರಸ್ಟಿನ ಡಾ.ರಾಮಕೃಷ್ಣ ತಂದೆ ತಾಯಿ ಫೋಟೋಗೆ ಪುಶ್ಪಾರ್ಚನೆ ಮಾಡಿ ಭಾವುಕರಾಗಿ ಅಪ್ಪ ಅಮ್ಮನ ಹೆಸರಲ್ಲಿಂದು ಶಿಬಿರ ಕಾರ್ಯಕ್ರಮ ಮಾಡುತ್ತಿರುವುದು ಸಂತಸ ತಂದಿದೆ, ಬಡ ಕೂಲಿಕಾರರ ಕುಟುಂಬದಲ್ಲಿ ಹುಟ್ಟಿ ಹೊಸಬೆಳಕು ಟ್ರಸ್ಟ್ ಸ್ಥಾಪಿಸಿ ಸಾವಿರಾರು ಜನರಿಗೆ ಕಣ್ಣುಗಳ ಪೊರೆ ಆಪರೇಷನ್, ಕಣ್ಣು ಇಲ್ಲದವರಿಗೆ ನೇತ್ರದಾನಗಳ ಮೂಲಕ ದೃಷ್ಟಿ, ಜೀವಗಳ ಉಳಿಸುವ ರಕ್ತದ ವ್ಯವಸ್ಥೆ, ಶಾಲಾ ಮಕ್ಕಳಿಗೆ ಆರೋಗ್ಯ ಶಿಬಿರ, ಅಮ್ಧ ಮತ್ತು ಅಂಗವಿಕಲರ ಸೇವೆ ಹಾಗು ನೊಂದ ಸಮಾಜಕ್ಕೆ ಅಗತ್ಯ ಸೇವೆಗಳನ್ನು ನೀಡುತ್ತಾ ಬಂದಿರುವುದು ನಮ್ಮ ಹೆಮ್ಮೆ ಎಲ್ಲರೂ ಅಂಗಾಂಗ ದಾನಕ್ಕೆ ಮುಂದಾಗಬೇಕೆoದರು.
ಡಾ.ಎA.ಕೃಷ್ಣಪ್ಪ ಮಾತನಾಡುತ್ತ ತನ್ನ ಮಗ ಧನುಷ್ಗೆ ಮಧುಮೇಹ ಆಗಿ ಕಣ್ಣು ಪೊರೆ ಬಂದಾಗ IAR’India ಸಂಸ್ಥೆಯಿAದ ೨೦೦೩ರಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತçಚಿಕಿತ್ಸೆ ಮಾಡಿಸಿ ಕೊಟ್ಟಿದ್ದೇವು ನಮ್ಮಿಂದ ಪ್ರೇರೇಪಿತನಾಗಿ ಜಿಗಣಿರಾಮಕೃಷ್ಣ ಅವರು ಹೊಸಬೆಳಕು ಟ್ರಸ್ಟ್ ಪ್ರಾರಂಭಿಸಿ ನಿರಂತರ ಸೇವೆನೀಡುತ್ತಿರುವುದು ಅಭಿನಂದನಾರ್ಹ ಎಂದರು.
ಜಿಗಣಿ ಪುರಸಭಾ ಸದಸ್ಯ ಜಿಗಣಿವಿನೋದ್ ಅಣ್ಣಾ ನಮ್ಮ ಸಮಾಜ ಸೇವೆಯ ಸ್ಪೂರ್ತಿ,ಸಮಾಜ ಸೇವಯನ್ನು ಕಲಿತದ್ದು ಅವರಿಂದಲೇ ಸಾವಿರಾರು ಕುಟುಂಬಗಳಿಗೆ ದಾರಿದೀಪವಾದ ಅಣ್ಣನ ಕುಟುಂಬಕ್ಕೆ ದೇವರು ಆರೋಗ್ಯ ಆಯಸ್ಸು ಕೊಡಲಿ ಎಂದರು.
ಕೊನೆಯಲ್ಲಿ ವೇದಿಕೆಯಲ್ಲಿದ್ದವರೆಲ್ಲಾ ಸೇರಿ ಶ್ರಿ ರಾಮಕೃಷ್ಣ ಕುಟುಂಬವನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಡಾ.ಲಾವಣ್ಯಕಿರಣ್, ಡಾ.ಎಂ,ಕೃಷ್ಣಪ್ಪ, ಜೆ.ಸಿ.ಕೃಷ್ಣಪ್ಪ. NCPS ಬಿ.ಸಿ.ಮೋಹನ್, ಜಿಗಣಿವಿನೋದ್, ಮುರಳಿ, ರಾಜೇಂದ್ರಪ್ರಸಾದ್, ವಾಣಿಶರ್ಮ, ಲಕ್ಷ್ಮೀ, ಜಗದೀಶ್ ಪಾಠೀಲ, ಸರಸ್ವತಿ. ಮಂಜುಳಾರಾಮಕೃಷ್ಣ, ಧನುಷ್ ಪ್ಯಾರಾತ್ರೋಬಾಲ್ ರೇಣುಕಾ, ಶಿವಶಂಕರ್, ರವಿ , ಕಾಂತರಾಜು, ವೆಂಕಟೇಷ್. ಲಾಯರ್ ವಿನುತಾ, ಜಯಮಾಲ ಮುಂತಾದವರಿದ್ದಾರೆ.
Subscribe to:
Post Comments (Atom)






No comments:
Post a Comment