Tuesday, March 8, 2016

EYE DONATION AT BANNERGHATTA ಬಂಧುಗಳೇ ಬನ್ನೇರುಘಟ್ಟದಲ್ಲಿ ನೇತ್ರದಾನ

EYE DONATION AT BANNERGHATTA 
ಬಂಧುಗಳೇ ಬನ್ನೇರುಘಟ್ಟದಲ್ಲಿ ನೇತ್ರದಾನ 
ಬನ್ನೇರುಘಟ್ಟದ ಮಾಜಿಪಂಚಾಯತಿ ಅಧ್ಯಕ್ಷರಾದ ಶ್ರೀ.ಬಾಬು ಸಿಂಗ್ ಅವರ ತಾಯಿ ಮತ್ತು ಊರಿನ ಹಿರಿಯ ಮುಖಂಡರಾದ ಪ್ರತಾಪ್ ಸಿಂಗ್ ಅವರ ಧರ್ಮಪತ್ನಿ 61 ವರ್ಷದ ಶ್ರೀಮತಿ ಮೀನಾಬಾಯಿ ಖಾಯಿಲೆಯಿಂದ ಬಳಲುತ್ತಿದ್ದು ಮೃತಪಟ್ಟಿರುತ್ತಾರೆ.
ಅವರ ಮಗ ಮಾಜೀ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಾಬುಸಿಂಗ್ ಅವರು ಮನೆಯವರೆಲ್ಲರ ಮನ ಒಲಿಸಿ ಹೊಸಬೆಳಕು ಟ್ರಸ್ಟನ್ನು ಸಂಪರ್ಕಿಸಿ ..ಕಣ್ಣುಗಳನ್ನು ನಾರಾಯಣ ನೇತ್ರಾಲಯ ಬೊಮ್ಮಸಂದ್ರಕ್ಕೆ ದಾನಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ನನ್ನಮ್ಮನ ಕಣ್ಣುಗಳು ಇಬ್ಬರು ಕಾರ್ನಿಯ ಅಂಧರಿಗೆ ಹೊಸಬೆಳಕಿನ ಬದುಕುನೀಡಬೇಕಾದರೆ ನಾವೇಕ ಮಣ್ಣಲ್ಲಿ ಮಣ್ಣಾಗಿಸಬೇಕು ಅಥವಾ ಏಕೆ ಸುಡಬೇಕು ... ಅದಕ್ಕೇ ನಾವು ದಾನ ಮಾಡಿದ್ದು ತಾವುಗಳೆಲ್ಲರು ತಮ್ಮ ಮನೆಗಳಲ್ಲಿ ಸಾವು ಸಂಭವಿಸಿದಾಗ ನೇತ್ರದಾನಕ್ಕೆ ಮುಂದಾಗ ಬೇಕು ಎಂದರು ...ನೋವಿನಲ್ಲೂ ನೇತ್ರದಾನ ಮಾಡಿದ ಕುಟುಂಬಕ್ಕೋಂದು ಸಲಾಂ.ಹೊಸಬೆಳಕು ಟ್ರಸ್ಟಿನ ಮುಖಾಂತರ ನೇತ್ರದಾನ ಮಾಡಿಸಿದ 162 ನೇ ಕಣ್ಣುಗಳು ಫೋಟೋ : ನಾರಾಯಣ ನೇತ್ರಾಲಯದ ವೈಧ್ಯೇ ಶ್ರೀ ಮಾಧುರ್ಯ. ಹೊಸಬೆಳಕು ಟ್ರಸ್ಟಿನೆ ಜಿಗಣಿರಾಮಕೃಷ್ಣ .ನೇತ್ರನಿಧಿಯ ಅಶೋಕ್. ಪ್ರತಾಪ್ ಸಿಂಗ್.ಬಾಬು ಸಿಂಗ್.ಪಾಟಿಲ್ ಇದ್ದಾರೆ. --
ನೇತ್ರದಾನ ಸಮಯ ಬಂದಾಗ ಬನ್ನೇರುಘಟ್ಟ ಬಾಗದಲ್ಲಿ ಲಕ್ಷ್ಮಿ ಲಲಿತಾಂಬ ಸೌಂಡ್ಸ್ ಮುನಿರಾಜು ಮತ್ತು ಅವರ ಗೆಳೆಯರನ್ನಗಲೀ ಅಥವಾ ಹೊಸಬೆಳಕು ಟ್ರಸ್ಟನ್ನಾಗಲಿ 24/7 ಸಂಪರ್ಕಿಸಿ ನಾವು ವ್ಯವಸ್ತೆ ಮಾಡುತ್ತೇವೆ...ಜಿಗಣ್ಭಿರಾಮಕೃಷ್ಣ 9945028899 / 9342171646


No comments:

Post a Comment